ಭಾನುವಾರ, ಏಪ್ರಿಲ್ 26, 2020

ಊರ ಕೇರಿಯ ಅತೀ ದೂರ
ಅಗ್ರಹಾರಿಗಳ ಸೇವೆಯ ಭಾರ
ಮೇಲೆ ನರಬೇಟೆಯ ಕಾಡು
ಹರಿದ ಗುಡಿಸಲ ಸಾಲು ಗೂಡು
ಕೂಗಳತೆಯಲಿ ಊರ ಶೂದ್ರರು
ನಾವೆಲ್ಲ ಅವರಿಗೆ ಅತೀ ಶೂದ್ರರು
ಇದೇ ನಮ್ಮ ಇತಿಹಾಸ
ಭಾರತದ ಅತಿವರ್ಣ ಇತಿಹಾಸ

ಮಳೆಗಾಲದೊಳು ಚಿಟಪಟ
ಹೆತ್ತವರ ಗುಡಿಯೊಳಗೆ
ಚಿಗುರಿದವರಿಗೆ ಅಭೀಷೇಕ
ಹಸಿದಾಗ ಹೊಟ್ಟೆಯ ಸಂಕಟ
ಸತ್ತವರು ಮಣ್ಣಡಿಯೊಳಗೆ
ಉಳಿದವರಿಗೆ ಪಂಚಾಮೃತಯೋಗ
ಇದೇ ನಮ್ಮ ಇತಿಹಾಸ
ಭಾರತದ ಅತಿವರ್ಣ ಇತಿಹಾಸ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ