ಶನಿವಾರ, ಜೂನ್ 4, 2016

ಉಸಿರಾಗು ಹಸಿರೆ

ಮರವಿದ್ದರೆ ಸಾಕಿತ್ತು 
ಮನತುಂಬಲು ಉಸಿರು 
ನೀರಿದ್ದರೆ ಬೇಕಿತ್ತು 
ಬಯಲಿಗೆ ಹಸಿರು 
ಹೊಳೆವ ಮಣ್ಣಿಗೆ 
ಸುರಿವ ಗಂಗೆಯ 
ತಂಪು ಕಣ್ಣಿಗೆ
ದುಡಿವ ರೈತಂಗೆ 

ಸೋಮವಾರ, ಜನವರಿ 25, 2016



ಕರ್ತನ ಕಾರಣವ
ಕಾಣಲರಿಯದವಂಗೆ
ಕೈಗಿಟ್ಟ ಮುಕುಟವ
ಬಿಟ್ಟು ಮುಖವಾಡದಂತಿಪುದು





ಹನಿಯುತ್ತಿಹ
ಮೈಯ ತಣಿಸುತ್ತಿಹ
ನೀರ ಬಿಂದುಗಳೆಲ್ಲಿ
ಹುಡುಕಿ ಕೊಡಬಲ್ಲುದೇನು
ಜಾರಿ ಹೋದ ಖುಷಿಯನು


           ಹನಿಗವಿತೆ  



ಕವಿತೆ ಕಟ್ಟುವ ಕಾಯಕವ
ತೆರೆದಿಟ್ಟವರಾರಿಲ್ಲಿ
ಮೊಗೆದು ಬಗೆದು
ಪೋಣಿಪರಿಲ್ಲಿ
ಜಂಗಮರ ವಚನ
ಮಂಟಪದಂತಿರುವಂತೆ
        ಹನಿಗವಿತೆ 

ಬಾನೆತ್ತರದಿಂದ ದುಮ್ಮಿಕ್ಕುತ್ತುವೆ
ಗಗನ ಚುಕ್ಕಿಯೂ ಅಲ್ಲ
ಮಿಂಚು ಸಿಡಿಲುಗಳಲ್ಲ
ಅಮ್ಮ ತೆರೆದಿಟ್ಟ ಬದುಕ ಪುಟಗಳು
ಮಡಿಚಿ ಇಟ್ಟವನಿಗೆ
ಸಾಲ ಪಾಠಗಳು