ಶನಿವಾರ, ನವೆಂಬರ್ 28, 2020

ಅಡವಿಯೊಳಗೆ ಅವಿತಿದ್ದ 
ನರಿಗಳೆಲ್ಲವು ಕೂಗಿಡುತಿರೆ..
ನಗರಕ್ಕೊಯ್ಯುತ್ತಿದೆ ವರ್ತಮಾನವು
ನುಂಗುವ ಭೀತಿಯ
ಆ ಕಾಳರಾತ್ರಿಯ..

ಭಯ ಛೇದಿಸೋ ಒಡಲು
ನಿರ್ಭೀತ ಅಲೆಗಳೆದ್ದ ಕಡಲು
ಸುನಾಮಿಯಂತೆರಗಲಿ
ನಿನ್ನಾತ್ಮ ಬಲದೊಳು
ಅಡಗಿ ತರಗೆಲೆಗಳ ಸದ್ದು
ನಡುಗಿ ಬೆವರಲಿ
ನಿನ್ನೆಡೆಗೆ ನುಗ್ಗುವ
ಕೋಪ ಹತಾಶೆಯ
ಹರಿತ ನುಡಿಗಳ ದಂಡು
ಕೊಲ್ಲುವ ಮನಸಿನ ಹಿಂಡು..