ಬುಧವಾರ, ಮಾರ್ಚ್ 21, 2018

ಬದುಕ ಕವಿತೆ

ಹಿತವಾದ ಮಾತಿರಲು
ಸತಿಯೊಲವಿನ ಸ್ನೇಹ
ಮಗುವಿನ ನಗುವಿರಲು
ಮತ್ತಿಲ್ಲ ಹೆಚ್ಚಿನ ದಾಹ
ಮನೆಯೊಳಗೆ ನಾನಿರುವೆ
ಮನದೊಳಗೆ ನೀನಿರುವೆ..
ಓ ಕವಿತೆ..

ನಿನ್ನೊಲವು

ನೀತಿಯ ಪಾಠದಲ್ಲಿ
ಹುಸಿ ಕೋಪ ಕೊಂಚ
ಜೊತೆಗಿರುವ ಮಾತಲ್ಲಿ
ನೀನಗೇನೊ ಸಂಕೋಚ
ನಾನೊಮ್ಮೆ ಮರೆಯಾದರೂ
ನಿನಗೇನೂ ಆತಂಕ

ಸೋಮವಾರ, ಮಾರ್ಚ್ 19, 2018

ಕಲ್ಯಾಣದ ಕೂಗು

ಧರ್ಮ ಕರ್ಮಗಳ
ಅಣಕಿಸಿ ಭಂಜಿಸುವ
ರಾಜಕೀಯ ಸರದಾರರ
ನೆಚ್ಚಿ ಕಚ್ಚಾಡುವ
ಕಾಯಕ ವ್ಯಾದಿಗಳೆ

ನಿಮಗೆಲ್ಲಿ ಅರ್ಥವಾಗುವುದು
ರಾಜಕೀಯ ತೊರೆದ
ಧರ್ಮ ಜೀವನದ
ಚಿಂತನಾ ಚಾವಡಿಯ
ಶಿವಶರಣರ ನಡೆ

ಜಾತಿಯಿಂದ ಜಾತನಲ್ಲ
ಚಿಂತನೆಯು ಪುಟಿದೇಳಲು
ನಿನ್ನ ಹೊಸಹುಟ್ಟು
ಶಿವ ಭಕ್ತರಿಗದು ಲೌಕಿಕ
ಸ್ವರ್ಗದಂತಿವುದು ಅರಿತರೆ
ತನ್ನರಿದವನಿಗೆ ಕೇಳಿಸದು
ಕಲ್ಯಾಣದ ಕೂಗು