ಭಾನುವಾರ, ಅಕ್ಟೋಬರ್ 30, 2022

ಹೆಣ್ಣು ಮಾಡಿದರೆ ತಪ್ಪು.. ಗಂಡು ಮಾಡಿದರೆ ತಪ್ಪಲ್ಲ.. ಭಲೇ ರಾಜಕೀಯ 
ಧನ್ಯೋಶ್ಮಿ ಭಾರತಾಂಬೆ
ತಾಯಿ ಭಾರತೀಯ ಪಾದ ಪದ್ಮಗಳ ಯಾವ ಕೈಯಲ್ಲಿ ಪೂಜಿಸುತ್ತೀರಿ..
ಅಣ್ಣ ಅಂತೆ ಅಣ್ಣ.. ಸಮರ್ಥಕರ ಏನನ್ನಬೇಕೋ ಶಿವ ಶಿವಾ.. ! 

ಅಮೃತವನು ಉಣಬಡಿಸುವ
ಮುಳುಗೇಳುತಿರುವ ಭರವಸೆಗಳಲಿ
ವಿಷಕಾಲಸರ್ಪವನು ಮಥಿಸುತ್ತಿರೆ
ವಿಷಜಂತುಗಳಂತೆ ವರ್ತಿಸುತಿಹರಿವರು
ಇವರ್ಯಾವ ಸೀಮೆ ನಾಯಕರು

ಅರಿಷಡ್ವರ್ಗವನು ಹದಗೊಳಿಸದವ
ಸಂಘ ನಾಮವ ಹಣದಿಂ ಕೊಂಬನೆ
ಕಾಮಕ್ಕಾಗಿ ಬಳಸುವ ವಸ್ತು ಹೆಣ್ಣೆಂಬನೆ
ನಾಲಗೆಯ ಹರಿ ಬಿಡುವವನು ಮರೆತನೆ
ದುರ್ಗಾ ಕಾಳಿ ಪ್ರತಿ ಮನೆಯ ಕನಸದು
ಭವ್ಯ ಭಾರತದ ನಾರಿ ಶಕ್ತಿಯಿದು
ಪದೇ ಪದೇ ಎಡವಿಕೊಳ್ಳುತ್ತಾ
ಜನರ ಅಪನಂಬಿಕೆಗೊಳಿಸದಿರಣ್ಣ
ಇಲ್ಲಿ ಮಾಡಿದಾ ಕಾರ್ಯಗಳಿಗೊಂದು
ಫಲ ಅನುಭವಿಸುವುದಲ್ಲಿ
ವೇದ ವೇದಾಂತಿಗಳೆಂಬರು
ಆದರೆ ಬಸವ ನುಡಿದಂತೆ 
ಇಹದ ಕರ್ಮಫಲ ಭಂಜಿಸುತಿಹುದೆನ್ನ
ಬಸವಳಿದ ಬದುಕನು ಈ ಜನ್ಮದಲಿ

ಭುವಿಯೊಡೆದು ತಿರುಳ ಬಗೆದವರ
ಆಕಾಶವನು ಕಾಯದಿಂದಲೆ ಮುಟ್ಟಿದ
ಮನ ತಟ್ಟದ ದೇಹವನ್ನೊಪ್ಪದ
ಅರ್ಥವಿಲ್ಲದ ಮನುಜ ದಾಹವನು 
ಕ್ರಿಮಿಯನ್ನಿಟ್ಟು ಶಿವ ತಾನಾಡಿಸುತಿಹನು
ಸಂಗಮನೊಲಿಸುವ ಪರಿ ಮರೆತೆವಯ್ಯ

ನೆಪವಾಗುತಿಹೆ ನೀನು
ಅನುಭಾವವನು ದಿಕ್ಕರಿಸಿ ಸಮರ್ಥನೆಯನಪ್ಪಿ
ಸ್ವಾರ್ಥ ಭುಗಿಯಲಿ ಪಲ್ಲವಿಸಿ
ನಾಲಗೆಯ ಎಳೆವವರ ಬಂಧುವಂತೆ ನೀ
ರಾಜಕಾರಣಿಗಳ ಮತಗಳ ಮಮಕಾರವಂತೆ
ನೀ ತೊರೆದ ಐಶ್ವರ್ಯ ಮದದೊಳಗೆ
ನಿನ್ನ ತಮಗಾಗುವಂತೆ ಬನ್ನಿಪರಯ್ಯ

ನೆನಪಾಗುತಿಹೆ ನೀನು
ಜಾತಿ ಭಂಡರ ನೀತಿಯನುಟ್ಟ
ಧರ್ಮದಮಲಿನ ಭಯದಿ ಸುಡುವರ
ಅರಿಷಡ್ವರ್ಗದೊಳು ಹೊರಳಾಡುವ
ನರನಾಟಕವನು ಬಿಸುಟು
ಕೂಡಲ ಸಂಗದಲಿ ನಾನೂ ಇರಬೇಕಿತ್ತು

ಪೃಥ್ವಿರಾಜ್ ಜಿ

ಶೈವ ಪರ್ವತಗಳ ನಡುವೆ

ಕಾಠಿಣ್ಯ ತಪೋನಿರತನವನು

ದೇವ ಮೆಚ್ಚಿಸಿ ತನ್ನಿಚ್ಚೆಗೊಳಪಟ್ಟು

ಅವನನ್ನೆ ಪಡೆದು ಅಸ್ತಿತ್ವವನು ಕಳೆದು 

ಭಕ್ತಿಶಕ್ತಿಯಲಿ ಲಿಂಗವನು ಪಿಡಿದು

ಶಿವಾತ್ಮವೆಂದೆನುತ ಗಹಗಹಿಸಿ ನಗುತ್ತಾ 

ಅಸುರಾಪುರಕ್ಕೆ ನೀಲಾ ವಾರಿಧಿಯ ಕಲಕುತ್ತ 

ಪಯಣಿಸಿದನಾ ರಾವಣೇಶ್ವರನು 


ಕೈಲಾಸದ ಬಿಳಿ ತಿಳಿಯಾದೊಡೆ

ಇಳಿದ ಗಂಗೆಯೂ ಸಮುದ್ರ ಸೇರಿದೊಡೆ

ಖಾಲಿ ಹಿಮಪರ್ವತಗಳಲ್ಲೇನಿದೆ

ಯುದ್ಧ ಅಸ್ತ್ರಗಳು ಫಲಿಸದು 

ಓಲೈಕೆ ತಂತ್ರವೊಂದೇ ಉಳಿದಿಹುದು 

ಲಿಂಗವನು ತಾ ಪಡೆಯಲು 

ಎಂದೆನುತಾ ಇಳಿದು ಬೆನ್ನ ಪಿಡಿದನು 

ಪಿತೃ ವ್ಯಾಮೋಹಿ ವಕ್ರದಂತನು


ಮೊನಾಚದ ಕಲ್ಲ ಶಿಖರಗಳು 

ಹಸಿರ ಕಾನನದ ಸೊಬಗು

ನಡುನಡುವೆ ಹರಿವ ಜಲವು

ನಿತ್ಯಕಾಯಕವ ಮುಗಿಸಿ

ಜಲಧಿಯೊಳ್ ಇಳಿದ ಅರುಣಾವರ್ಣನು

ಲoಖಾಧಿಪತಿ ತಾ ದ್ವಿಜನಾಗಿರಲು

ಅರ್ಕನಿಗೆ ಸಂಧ್ಯಾ ವಿದಾಯ ಹೇಳದಿರನೆ

ಅತ್ತಿತ್ತ ನೋಡುತ್ತಾ ಯೋಚಿಸ ತೊಡಗಿದ 

ಕೆಳಗಿಟ್ಟರೆ ತಪಾಸೆಲ್ಲಾ ನೆಲ ಸೇರುವುದು