ಶುಕ್ರವಾರ, ನವೆಂಬರ್ 25, 2011

ಪಿ .ಜಿ ಯ ನೆನಪು........


ವಿದ್ಯಾರ್ಥಿ ಸಂಘದ ಅಲವತ್ತು
ಚಿನ್ನಪ್ಪರಿಂದ ನಗುವಿಗೆ ಒತ್ತು
ಯಕ್ಷ ಕಲಾವೇದಿಕೆಯ ಸುತ್ತು
ಪ್ರೇಕ್ಷಕರ ನಗುವಿನ ಗಮ್ಮತ್ತು
                                        ಸಾರಿ ಸಾರಿ ಹೇಳುತ್ತಿದ್ದರು ಹನಿಗವಿ
                                        ಏನೋ ಇದೆ ಅದರೊಳಗೆ ಸವಿ ಸವಿ
                                        ಪ್ರಣಯ ಕವಿತೆಯೆಂದು ನಕ್ಕರೆ ಸಾಲದು
                                        ನಿಮಗಾಗಿ ನಾ ಕೊಡುವ ಸಾಲವದು
ಹಾಸ್ಯಲಾಸ್ಯದ ನಗೆ ಸಂಜೆಯಲಿ
ನಗುನಗುತಾ ನಲಿ ನಲಿ
ತುಂಬು ಮನದ ನಗೆಗಡಲಿನಲಿ
ನಗು ಸದಾ ತೇಲಿ ಬರಲಿ....

ಶುಕ್ರವಾರ, ನವೆಂಬರ್ 18, 2011

ಪ್ರ - ಬುದ್ಧನೆಲ್ಲಿ?.......



ಚಿನ್ನದಂತ ನಗುವಚೆಲ್ಲಿ
ಇಟ್ಟು ಗುರಿಯ ಹಾವ ಬಳ್ಳಿ
ಸುಟ್ಟು ಬಿಡುವ ಚೀನದಲ್ಲಿ
ಪ್ರಬುದ್ಧನಾದ ಬುದ್ಧನೆಲ್ಲಿ ...?
                             ಮತವಿರದ ತತ್ವದಲ್ಲಿ
                             ಪಥವಿರದ ವೇಗದಲ್ಲಿ
                             ವ್ಯತಿರಿಕ್ತ ನೆಲದಲ್ಲಿ
                             ಪ್ರಬುದ್ಧನಾದ ಬುದ್ಧನೆಲ್ಲಿ...?
ಶಾಂತಿ ಮರೆತ ನಾಯಕರಲ್ಲಿ
ಕ್ರಾಂತಿ ತುಂಬಿದ ಒಡಲಲ್ಲಿ
ಜಗವ ಗೆಲ್ಲುವ ತವಕದಲ್ಲಿ
ಪ್ರಬುದ್ಧನಾದ ಬುದ್ಧನೆಲ್ಲಿ...?
                            ಮತ್ತೆ ಇದೇ ಭಾರತದಲ್ಲಿ
                            ಶಾಂತಿದೂತನ ಮಣ್ಣಕಣದಲ್ಲಿ
                            ಹುಟ್ಟಿ ಬರಬಹುದೇ ದೀಕ್ಷೆಯಲ್ಲಿ
                            ಪ್ರಬುದ್ಧನಾದ ಬುದ್ಧನಲ್ಲಿ....!!!
                                                                     ನಿಮ್ಮ....
                                                                                     ರಾಜ್.......

ಗುರುವಾರ, ನವೆಂಬರ್ 17, 2011

ವಿಕೃತಿಯ.... ಸಂಸ್ಕೃತಿಯ..?





ರಾಮ ರಾಮ ರಾಮ ರಾಮ ರಾಮ....
ತುಟಿಯ ತುದಿಯಲಿ
ಗರ್ಭ ಗುಡಿಯಲಿ
ನಿತ್ಯ ಜಪದಲಿ ಸೀತಾರಾಮ...

ರಾಜಸಭೆಯಲಿ ಎಲ್ಲ ಹೋಮ

'ಕುಣಿಸಿರೆ ಬಾಲೆಯ
ಕೆತ್ತಿರೆ ಭಂಗಿಯ
ತೀರೆ ಸವಿಯಿರಿ ಕಣ್ಣಕಾಮ'

ಕವಿಗಲೆಂಬರ  ಕಾವ್ಯನಾಮ
'ರಾಜ ಪುರುಷನೆ
ಮುರಳಿ ರಸಿಕನೆ
ಬಲಿರೆ ಬಲಿರೆ ರಾಜಧಾಮ..'

ವಿಪ್ರರೆಂಬರು ' ಹೇ.. ಮಾ..
ಧನ್ಯ ಧನ್ಯ ! ರಾಜಧರ್ಮ
ಕಾಣಿರಿಲ್ಲಿ ಕುಲದ ಮರ್ಮ
ಉಳಿದು ಬೆಳೆಯಲಿ ಸಮಾಜನೇಮ'


ಮೂರ್ಖ ಸಂಗಡದಲ್ಲಿ ಕಾಮ
ಮನದಿ ಮನುಮಥ
ಹೊರಗೆ ಮನುಮತ
ಎಳೆದು ಬಿಟ್ಟರು ಪಂಗನಾಮ ....!!!

ರಾಷ್ಟ್ರ ಪ್ರೇಮ

ಉದಿಸಿತಂದು ರಾಷ್ಟ್ರಪ್ರೇಮ
ತಲ್ಲಿಬಿಟ್ಟರು ಎಲ್ಲ ಕಾಮ
ಹುಟ್ಟಿಕೊಂಡಿತು ಕ್ರಾಂತಿಧಾಮ
ಬಿಟ್ಟು ಬಿಟ್ಟರು ವೇದ ಸಾಮ..
                                     ಅಖಂಡವೇ ನಮ್ಮ ಸೀಮಾ
                                     ಎಳೆದು ಬಿಟ್ಟರು ಭರತ ನಾಮ
                                     ಸಟೆದು ನಿಂತ ಮೈಯ ರೋಮ
                                     ದಾಸ್ಯವೆಲ್ಲ ಹೋಮ ಹೋಮ....
ಕೂಗಿ ಕರೆದರೂ "ಹೇ.. ಮ.."
ಕೇಳಿಬಿಟ್ಟರು ಯಾವುದು ಸಮ
ದೂರಸರಿದರು ರಜತಮ
ತಂದು ಸಾರಿದರು  ಸ್ವರಾಜ್ಯವೇ ಧರ್ಮ...

ಮುಂಗಡ ಪತ್ರ...

ಹಿಂದೆ ಫೆಬ್ರುವರಿ ಹದಿನಾಲ್ಕಕ್ಕೆ
ಬರೆದಿದ್ದೆ ಪ್ರೇಮಪತ್ರ...
ಆಗ ಹೇಳಿದಳು ಪ್ರೀತಿ ಬದಲು
ನನಗೇನು ಕೇಳೆನು ನಿಮ್ಮತ್ರ...
ಈಗ ಬರೆಯುವಳು ತಿಂಗಳ
ಹದಿನಾಲ್ಕು ಬಾರಿ........
ಮುಂಗಡಪತ್ರ.....

ಚುನಾವಣೆ....

ಹೃದಯ ಬಾಗಿಲ ತೆರೆದು
ಪಕ್ಷ ಜ್ಯೋತಿಯ ಬೆಳಗಿ
ಮುದದಿಂದ ಭಜಿಸೋ
ನನ್ನ ನಾಮವ..
ಹೇ...ಮತದಾರ...
ನನ್ನ ನಾಮವ....

ಪ್ರೇಮಪತ್ರ

ನಾನವಳಿಗೆ ಬರೆದೆನು ಪ್ರೇಮಪತ್ರ
ಗೆಳಯನಿಗೆ ಹೇಳಿದೆ ತಲುಪಿಸು ಮಿತ್ರ
ಕೇಳಿದೆ ಮರುದಿನ ಏನಿದೆ ಉತ್ತ್ರ
ಅವನೆಂದ... ಮಿತ್ರ ಅವಳಾದಳು ನನಗತ್ರ...!

ಬಸ್ಸು

ಬಂದಿತು ಬಂದಿತು ನಮ್ಮೂರಿಗೆ ಬಸ್ಸು
ಬಸ್ಸಲ್ಲಿ ಕಾಲೇಜು ಹುಡುಗರದ್ದೇ ರಸ್ಸು
ನೋಡಬೇಕು ನೇತಾಡುವ ಅವರ ಗಮ್ಮತ್ತು
ಬಿದ್ದರೆ ಮಾತ್ರ ತಲೆ ಒಡೆದು ಶರಬತ್ತು.....

ಹೆಸರು

ರಾಜಕಾರಣಿಯೊಬ್ಬರ
ಭಾಷಣದ ಒಸರು
ನಮ್ಮೆಲ್ಲರ ತೆರಿಗೆಯ
ಹಣದಿ ಮಾಡಿ ಸೂರು
ಹಾಕುವರು ನಾಮಫಲಕದಲ್ಲಿ
ತಮ್ಮೆಸರು...

ರಾಜಕಾರಣಿ

ನಿಂತಾಗ ಹೇಳುವರು ನಾನೊಬ್ಬ ಪಕ್ಕ
ಗೆದ್ದಾಗ ಮಾಡುವರು ಕೈತುಂಬಾ ರೊಕ್ಕ
ಕೇಳಿದರೆ ನುಡಿವರು ಬಾಯಿ ತುಂಬಾ ಸೊಕ್ಕ
ಹೊಂದಿಸುವರು ಪಟ್ಟಿ ಸಾಲದ ಬಜೆಟಿಗೆ ತಕ್ಕ
ಬಿದ್ದಾಗ  ಮಾಡುವರು ಕೂಡಿಟ್ಟ ಹಣದ ಲೆಕ್ಕ......

ನುಡಿಸಿರಿ

ಸದ್ಯದಲ್ಲೇ ನುಡಿಸಿರಿಯ ೩ ದಿನಗಳ ಅನುಭವ ಕವನದ ರೂಪದಲ್ಲಿ ವ್ಯಕ್ತಪಡಿಸಬೇಕೆಂದಿದ್ದೇನೆ... ಸ್ನೇಹಿತರೆ...