ಕದಲಿ ವನದಲಿ
ದೂಕಿ ಬರುತಿದೆ
ಒಲವ ತಂಗಾಳಿ
ತೊದಲು ನುಡಿಯಲು
ಮಳೆಯು ಬರುತಿದೆ
ಮನಸು ಖಾಲಿ ಖಾಲಿ
ಸೊಗಸ ಹಣೆದಿದೆ
ನಿನ್ನ ಎದುರಲೆ
ನಿಂತ ನಿನ್ನ ಕವಿತೆ
ಮೂಗು ಕಾಡಿದೆ
ಮಣ್ಣ ಪರಿಮಳ
ಮರೆತೆ ಅದರ ಸಾಲು
ಕೇಳ ಬಂದೆನು
ಚೆಲುವ ತುಂಬಿದ ಕಣ್ಣಲಿ
ಹೇಳಲಾರೆಯ ಎನ್ನದಿರು
ಸಮಯ ಬರುತಲಿ
ಚಿಗುರು ಮೂಡಲಿ
ಹೇಳಿ ಬಿಡುವೆನು ನಾನು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ