ಬುಧವಾರ, ಏಪ್ರಿಲ್ 29, 2020

ಬೆಳಗಿದಾ ಸೂರ್ಯ ಮುಳುಗದಿಹನೇ
ಕತ್ತಲೆಗೆ ಭುವಿಚಂದ್ರನೊಡನಾಟವನೇ
ಅವನಿತ್ತ ಪ್ರೀತಿ ಭಿಕ್ಷೆ ಎನ್ನುವುದೇ
ಅವನಿಲ್ಲದಿರೆ ಇನ್ನೊರ್ವರಿರುವುದೇ
ಅಂತ್ಯವಿವುದಯ್ಯಾ ಗೆಲುವಿನಾಟಕ್ಕೆ
ನೋವುನಲಿವು ಸೋಲಿನಾ ಪಾಠಕ್ಕೆ

ಪ್ರಾಣದೇವನ ಲೀಲೆಗೆ ನಾಮ ನನ್ನದು
ಆತ್ಮ ದೇಹವ ತೊರೆಯಲು ವಿಧಿ ಎನ್ನದು
ಸರ್ವಕಾಲಿಕಾ ಸತ್ಯವು ಸಾವ ತಡೆವರಿಲ್ಲ
ನಾನೇ ನಾನೇ ಎನುತ ಬೀಗಿದವರೆಲ್ಲ
ಮಡಿದ ಋಣವ ಪಡೆದವರು
ದೀಪದಾ ಬೆಳಕಲಿ ಬದುಕುವರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ