ಮಂಗಳವಾರ, ಏಪ್ರಿಲ್ 26, 2011

ಗೆಳತಿ......

ಓ ನೇಸರ
ಯಾಕೆ ಬೇಸರ?
ಭುವಿಗೆ ಬೆಳಕ ಚೆಲ್ಲೋ
ನೀನೇ ತಾನೇ ಗಗನಭಾಸ್ಕರ....
ಜಗವೇ ಸುತ್ತಿ ನಿನ್ನ ಸುತ್ತ
ಇರುಳ ಕಳೆದು ನಲಿವ ತುಂಬಿ
ಚೆಲುವ ಸುರಿವೆ ನಮಗೋಸ್ಕರ...
ಕನಸ ಕಾಣೋ
ಮನಸ ಪ್ರೀತಿಯಂತೆ
ಸ್ನೇಹದೊಲವ ತುಂಬೋ
ನನ್ನ ಮಮತೆಯಂತೆ
ನೀನೇ ಸುಂದರ.....
ಜಗದ ನೋವು ಅಲ್ಲೇ ಇರಲಿ
ಯುಗವು ಕಾವ್ಯ ಬರೆಯುತಿರಲಿ
ನಿತ್ಯ ನಲಿವು ತುಂಬುತಿರಲಿ
ಬಾ ಮರಳಿ ಖುಷಿಯ ತಾ
ಮನಸ ತುಂಬಾ ನಗುವ ತಾ
ಹೃದಯದೊಳಗೆ ನಿನ್ನ ಸಿಂಗರಿಸಿ
ಕಾಯುವೆನು ಸದಾ ನಾ...
by,
raj......


ಸುಮ್ಮನಿಸದಿರು ಮನಸೇ
ನಾ ಮರೆಯಾದರು ಅದು ಕ್ಷಣಿಕ....
ಮಾತು ಕಳೆದಾಗ
ನೋವು ವ್ಯಥೆಯಾಗಿ
ಕಥೆಯಾಗಿ ರೂಪುಗೊಳುವುದೇ ಜೀವನ....
ನನಗರಿವಿರೆ ಗೆಳತಿ
ನೀ ಬೇರೆ... ನಾ ಬೇರೆ ದಾರಿಯ ಹೂವುಚಿತ್ತಗಳು...
ನಾ ಎಷ್ಟು ಕಾದರು
ಆ ನಿನ್ನ ಮನಸು ನಿಲುವುದೇ ಸುಮ್ಮನೆ
ಹುಡುಕ ಬಯಸಿರೆ ಒಲವನು....
ನಿನ್ನ ಪಯಣದ ಹಾದಿಗೆ
ನನ್ನ ಪನ್ನೀರ ಸಿಂಚನ....
ಬಸವಲಿಯದಿರು ಕೊಡುವೆ ನೆರಳಿನ ಆಸರೆ.....
ನಿನ್ನ ಮೌನಕೆ ನಾ ಹಾಡುವೆ ಸ್ವರಗಳ....
ನನ್ನ ಜೊತೆಯಲೇ ದಶ ದಿಕ್ಕಿಗೆ
ಸಪ್ತ ರಾಗವು ಹೊಮ್ಮಿ ಬರಲಿ ನಿನ್ನೊಳು....
by,
nin preetiya snehita........

ಕಡಲ ತಡಿಯ ಮರಳ ಮೇಲೆ
ಭುವಿಯ ನೋಡಿ ನಗುವವನು ನಾನು ...
ಒಡಲ ಗುಡಿಯು ಮರುಳ ಶಾಲೆ
ಕಾವ್ಯ ಹೊತ್ತು ಬರುವವನು ನಾನು.....
ಸಿಡಿಲ ಕಾಂತಿಯ ತುಂಬಿದ ಮಳೆ
ಸವಿಯ ಬೇಕು ಬಾರೆ ನೀನು.....
ಮಡಿಲ ಮೇಲೆ ಮಲಗುವೆ ನಲ್ಲೆ
ಶಿರವ ಸವರಿ ಮುದ್ದಿಸೆ ನೀನು.....
ಗೆಳತಿ ,
ಮುಂಗಾರು ಹಿಂಗಾರು ಏನೇ ಬರಲಿ...
ಸದಾ ಇರುವೆ ಪ್ರೀತಿ ತುಂಬಿ ನಿನ್ನ ಜೊತೆಯಲಿ.......
by,
raj...
KANNADA POEM
varniya rathavanu yeleyona baaraa...
kavikavya chatravanittu
rajatumbida a jaina kashiyolu..
gelati baa bidisona chittaara....
rajatama kamava bisuta
a digambarana naguvinolu......
by,
raj.....

ಗೆಳತಿ.....

ಪ್ರತಿವರುಷ ಮಳೆಯೊಳಗೆ ನೆನಪ
ತರುವವನು ಯಾರು?
ಹನಿಯೊಳಗೆ ಬೆಳ್ಳಿಯ ಗೆರೆಯನು
ಎಳೆದವನು ಯಾರು?
ಅದ ನೋಡಿ ನಮ್ಮೊಳು
ಪ್ರೀತಿ ತುಂಬೋನು ಯಾರು ?
ಗೆಳತಿ ನೀ ಹೇಳಬಲ್ಲೆಯ
ಈ ಸತ್ಯವನು..?

ಹಾಡು ಯಾರೂ ಇಲ್ಲದ ವೇಳೆ
ಕುಣಿದಾಡು ನೀನೋಬ್ಬಲಿರೆ
ಹನಿ ಹನಿಯು ಮಾತಾಗಲಿ
ಮಳೆ ಹನಿಯೇ ಹೂವಾಗಲಿ

ನಿನ ಹೆಜ್ಜೆಯ ಗೆಜ್ಜೆಯಲಿ
ಧರಿತ್ರಿಯೇ ಸಂಭ್ರಮಿಸಲು
ಮನತುಂಬಿ ಹರುಷದಲಿ
ನಗುತಿರು ಈ ಸಿಂಚನದೊಳಗೆ...........
Thank you for cool rain.......