ಕನಕನಿಲ್ಲದ ಕಡೆ
ಭಾಷೆಯಾಕೆ ಧರ್ಮವೇಕೆ
ದೇಶಯಾಕೆ ಕರ್ಮವೇಕೆ
ಬದುಕು ನಿಲ್ಲುವೆಡೆ
ಅವನಲ್ಲದೆ ಮತ್ಯಾರು
ಜಿವನಕರ್ಥ ಕೊಟ್ಟಾರು..
ಭೋಗ ಮೆರೆವಲ್ಲಿ
ಭಕ್ತಿ ಸುದೆಯಿರಲು
ಇದಕ್ಕಿಂತ ಮರುಲೇನು
ಎಂದೆನ್ನುವನು ನಮ್ಮ ಕನಕ
ತ್ಯಾಗ ಮರೆಯಲ್ಲಿ
ನಗುತ ಬದುಕಿರಲು
ಅದಕ್ಕಿಂತ ತಿರುಲೇನು
ಎಂದೆನ್ನುವನು ನಮ್ಮ ಕನಕ
ಎಡವಿ ಬಿದ್ದವನ
ಮೇಲಕ್ಕೆತ್ತಿ
ನಡೆಯಗೊಡದವನ
ಪಕ್ಕಕ್ಕೆತ್ತಿ
ದಾರಿಸುಗಮವಗೊಳಿಸಿ
ನಡೆಮುಂದೆ
ಎಂದೆನ್ನುವನು ನಮ್ಮ ಕನಕ..
ವ್ಯಕ್ತಿ ಆತ್ಮದೊಳಗೆ
ಭಕ್ತಿಯ ನಂಬಿ
ಶಕ್ತ ಸಮಾಜದೊಳಗೆ
ಶಕ್ತಿಯ ತುಂಬಿ ನಿಜದೃಷ್ಟಿಯಲಿ ನೋಡು
ಎಂದೆನ್ನುವನು ನಮ್ಮ ಕನಕ