ಜೀವ ತೊರೆದು ಕೊರೆವ ಬದುಕ
ಕಾಣ ಬಲ್ಲೆಯಾ ನೋಡು..
ಕಡಲ ತಡಿಯ ಹಾಲ ನೊರೆಯಲಿ
ಮೊರೆವ ಆಕ್ರಂದಣವ ಕೇಳು
ಎಷ್ಟು ಜನ್ಮವ ತಳೆದರೇನು
ಮನುಜನಾಗಿ
ಗುಡಿಗೆ ಬಂಗಾರ ಮೆತ್ತಿದರೇನು
ದಾನಿಯಾಗಿ
ಸೇರದಿದ್ದರೆ ನಿನ್ನ ತನುವು
ನಿನ್ನೊಳಿರುವ ಜನಮನವನು
ಮೈಯ ನೀನು ತೊಳೆದರೇನು
ಪವಿತ್ರ ನದಿಯಲಿ
ಸತ್ಯವ ಸುಳ್ಳಿಗೆ ಬೆಸೆದರೇನು
ನೂರು ವೇದಿಕೆಯಲಿ
ಮಾಡದಿರೆ ಅನೂಕೂಲವನು
ಬದುಕುವ ಪರಿಸರಕ್ಕೆ
ಇಹದೊಳಗೆ ಬದುಕು ಕಾಣದಿರೆ
ಸಕಲವು ನಿನ್ನದೆಂದು
ಕನಿಕರಿಸು ತಪ್ಪು ಮಾಡಿದೆನೆಂದು
ಪರದೊರಗೆ ಕಂಡು
ನೂಕಿ ಬಿಡಲಿ ನೆನಪುಗಳ
ಪಶ್ಚಾತಾಪದ ನರಕದೊಳು..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ