ಕಾವವನು ಕಾಯುವನು
ಸಂಶಯವ ಕಾಣದೆ
ನಗುವ ತರುವ ಮೊಗದಿ
ನೀ ಕರೆಯದಿರು
ಎದೆಯ ಕೊರೆಯದಿರು
ದೇವನಿಲ್ಲ ಗುಡಿದೇಹದೊಳಗೆಂದು
ನೀನಾಗುವೆ ನಮ್ಮವರಿಗೆ
ಆತನಿರುವ ಸಂವೇದನೆಯು
ಈ ನಿಜವರಿಯೆನೇನು
ಸಂಕಟ ತಾ ನಮಗಿರದೆ
ಕಲ್ಲುಗೋಡೆಗಳಿಗೇನಾಯ್ತು
ನೀ ಬೊಬ್ಬಿಡಲು
ಬೆಳಂದಿಗಳು ಬೆಳಕಲ್ಲವೇ
ಆ ಕತ್ತಲೆಯೊಳು
ನಿನ್ನ ಹಿರಿ ತಲೆಮಾರು
ಬೆಳಗಿಲ್ಲವೇ ಮನೆಮನವನು
ಮತ್ಯಾಕೆ ಅಂಜಿಕೆಯು
ಈ ಮೂಢ ಮನದಲಿ
ನಾ ಓದದ ಪುಟಗಳ
ತಿರುವಿ ಭಯದೊಳು
ಬದುಕೆನ್ನಲಿ ಅವರು
ನಂಬಿದ ಜೀವನ ನಾನುಳಿಯೆ
ನನ್ನ ದೇವರು ಇವರೆ
ನಮಗೆ ನೆರವಾದವರು
- ಪೃಥ್ವಿರಾಜ್ ಗಂಗೋತ್ರಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ