ಸೇರುತಿಹುದೆಲ್ಲವು ನಿನ್ನೆದೆ..
ಮರದ ಬೇರಿನ ಋಣದ ಬೆವರಲಿ
ಹನಿವ ನೀರಿನ ಕಣದೊಳು
ಹಸಿರ ಬನದೊಳು ನಾಗನಡೆಯೊಳು
ಹರಿವ ತೊರೆಯು ನಿನ್ನದು
ಧುಮುಕಿ ನೆಗೆಯುವ ಹಾಲ ನಗೆಯು
ನಭಕ್ಕೆ ಚೆಲ್ಲುತ ತಂಪಿಡುತಿರೆ
ಕೃಷ್ಣ ಕೃಷ್ಣ ಕೃಷ್ಣ ಎನ್ನುತಿವೆ ಕಾಡೊಲು
ಭಜಿಸೆ ನಾಮವು ಪ್ರಾಣಿ ಸಂಕುಲದೊಳು
ತಾಳ್ಮೆ ಕಳೆದ ದೇಹದಾಹದಸಿವು
ಬಾಯರಿ ನಿನಗೆ ಸೋತು
ನಿನ್ನ ಭಕ್ತಿ ಅರಳಿಸಿವುದೆನ್ನೆದೆ
ಚಿಗುರಿದೊಲುಮೆಯ ಉಳುಮೆಗೈಯುತಾ
ನಿನ್ನತನದಿ ತೂಗಿದಾ ತೆನೆ
ಸೇರುತಿವುದೆಲ್ಲವು ನಿನ್ನೆದೆ
ಕೃಷ್ಣಾ... ಸೇರುತಿಹುದೆಲ್ಲವು ನಿನ್ನೆದೆ..