ಶುಕ್ರವಾರ, ಏಪ್ರಿಲ್ 24, 2020

ಕರ್ನಾಟವೆಂಬ ನೆಲದೊಳ್
ಪದ ಕಸಿಯ ಮಾಡಿದೊಡೆ
ಹಸಿರಾಗುವುದೆನ್ನ ಕನ್ನಡ
ಹೆಸರಾಗುವುದೆನ್ನ ಕನ್ನಡ
ಹಳೆಗನ್ನಡ ನಡುಗನ್ನಡ
ಹೊಸಗನ್ನಡ ಪ್ರಾದೇಶಿಕ ಕನ್ನಡ
ಪುಸ್ತಕ ಸಮಚಿತ್ತದೊಳ್
ಬರೆವ ಚೆಲುವ ನುಡಿಗನ್ನಡ
ಎನ್ನೆದೆಯ ಭಾಷೆಯಾಯಿತು
ಜ್ಞಾನ ಶಿಖರವನು ತಾತ್ವಿರಿಂದೆತ್ತಿ
ಹೊನ್ನ ಪದಗಳ ಸಾಗರದಿ
ಕವಿಪುರಜನರೆಲ್ಲಾ ಕಡೆದಾಗ
ಅದುವೇ ಅಮೃತ ಕನ್ನಡ
- ಪೃಥ್ವಿರಾಜ್ ಜಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ