ಮಂಗಳವಾರ, ಜನವರಿ 31, 2012

ಪ್ರಕೃತಿ ಕೃತಿಯಾಗು

ಬಟ್ಟೆ ಹಾಸೂ ತಂತಿಯ ಮೇಲೆ
ಇಬ್ಬನಿಯ ಸಾಲೋಲು
ಇಕ್ಕಿದವರಾರೋ...?
ಚಿಟ್ಟೆ ಕುಳಿತಿರಲು ಮೇಲೆ
ಹೂವ ಕೀಳಲು
ಹೇಳಿಕೊಟ್ಟವರಾರೋ..?

ವವಿಧ್ಯತೆಯಲಿ ವೈರುದ್ಯವನು
ತಂದು ಎಸೆದವನು
ನೀನಲ್ಲವೇ ಹೇಳು...   ?
ಮತ್ತೆ ಮತ್ತೆ ಆಸೆಯ ಭಾವ
ಇನ್ನೊಂದರ ಸೌಂದರ್ಯ
ಕಸಿಯೋ ಸ್ವಭಾವ ನಿನದಲ್ಲವೇ.....?


ಪ್ರಕೃತಿ ಕೃತಿಯಲಿ ಶ್ರುತಿಯಾಗು
ಮರ್ಕಟ ಮನವನು ಕೃಷಿ ಮಾಡು
ಮಾನವತ್ವತೆಯನು  ಸಾರು 

ಪ್ರೀತಿ ರಥವನ್ನು ನೀ ಸೇರು.....