ಶಾಲೆಯಂಗಳದಿ ಮುಂಜಾವಿಗೆ
ಏರುತಿಹುದೆಮ್ಮೆಯ ಬಾಹುಟ
ಪುಟ್ಟ ಪುಟ್ಟ ಹೃದಯದಲಿ
ತುಂಬಿ ದೇಶದೊಲುಮೆಯ||೨||
ಗಗನದೆತ್ತೆತ್ತರಕ್ಕೆ ಒಯ್ಯುತ್ತಿದೆ
ನಮ್ಮೆಲ್ಲರ ಕನಸುಗಳನು
ನನಸಾಗಿಸಲು ನಾವಿಂದು
ಮಾಡೋಣ ನಿಜದ ಸಂಕಲ್ಪ ..
ಧರ್ಮ,ಜಾತಿ,ಮತಗಳು
ಭಾಷೆ, ಪ್ರಾಂತ ಮಿತಿಗಳ
ದಾಟಿ ಕಟ್ಟಿದ ರಾಷ್ಟ್ರದಲಿ
ಸಮರಸ ಭಾವ ಚೆಲ್ಲಿದೆ..
ಪರಮಾಧಿಕಾರವಿದು ನಮ್ಮದು
ಪೂರ್ಣ ಸ್ವತಂತ್ರ ಗಣರಾಜ್ಯ
ಏಕ ಸೂತ್ರ ಬಂಧವು
ನಮ್ಮೀ ಸಂವಿಧಾನವು..
ನೆನೆಯೋಣ ಮೆರೆಯೋಣ
ನಾಳೆಯ ಬರೆಯೋಣ
ಈ ಗುರು ಸಾನಿಧ್ಯದೊಳು
ನಮ್ಮ ಪ್ರೀತಿಯ ನೆಲದೊಳು..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ