ಭಾನುವಾರ, ಜನವರಿ 19, 2020

ನೀ ಕಾವ ಭರವಸೆ
ನನ್ನ ಜೊತೆಗಿರಲು
ತಲೆಬಾಗೆನು ಸೋಲಿಗೆ
ನನ್ನೊಳಗೆ ತುಂಬಿ
ಭವಿತವ್ಯದ ಕನಸನು
ದೇವರಾದೆನು ಪಾಲಿಗೆ..
ಓ ಗುರುವೆ
ನಿನ್ನ ಜ್ಞಾನದ ದೀವಿಗೆಯೊಳು
ನನ್ನ ಅಂಧಕಾರವನು
ಮನದಿಂದ ತೊಳೆದೆ
ನಿನ್ನನಾಲಗೆಯ ಪದಗಳೆಲ್ಲವ
ಆಲಿಸುವ ಮಗುವಾಗಿ
ಬಾಲ್ಯವನು ಕಳೆದೆ..

ಪ್ರತಿಗಳಿಗೆಯೊಳು ಎಡವಿದರು
ಅದುವೇ ಗುರುವೆಂದು
ಮರುಗಿ ಬೀಳದಿರೆಂದೆನು
ನಿನ್ನ ಅನುಭಾವವನು
ಭಾವದೊಳಗೆ ಬೆಸೆದು
ನನ್ನೊಳಗೆ ಚೈತನ್ಯವನು ತುಂಬಿದೆನು..
ಓ ಗುರುವೆ
ಏಕಾಂತದೊಳು ದುಡುಕಿನೊಳು
ನಿನ್ನನ್ನು ಸ್ಮರಿಸಲು
ಸಮಚಿತ್ತವನು ನೀಡು
ಸಂಕಷ್ಟಕ್ಕೆ ಧೈರ್ಯವೇ ನೀನಾಗು
ಆತ್ಮಕ್ಕೆ ಪ್ರೇರಣೆಯಾಗು
ನನ್ನೀ ಜೀವನವನು ಕಾಪಾಡು..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ