ಭಾನುವಾರ, ಫೆಬ್ರವರಿ 9, 2020

ಜೀವದ ತಂತಿಯು ಮೀಟಿದೆ
ಹೃದಯದ ಗೆರೆಯನು ದಾಟಿದೆ
ಪಲ್ಲವಿ ಅರಿಯಲು
ಒಲವನು ಮರೆಯಲು
ಅನುಪಲ್ಲವಿ ತಾನೆ ಜಾರಿದೆ
ಭಾವನೆಗಳನು ಮಾರಿದೆ..
ಭಾವನೆಗಳನು ಮಾರಿದೆ..

ನೀರಿಗೆ ಬೀಳುವ 
ಕಲ್ಲಿನ ದನಿಯು
ಶಾಂತತೆಯನ್ನೆ ಕದಡಿದೆ
ಜೀವನ ಚೈತ್ರವ
ತುಂಬಿದ ನೆನಪುಗಳ
ಸಂಬಂಧವನ್ನೇಕೋ ಕಡಿದಿದೆ

ಮತ್ತದೇ ಬಿರುಗಾಳಿ
ಸುಡು ಬಿಸಿಲಿನಲಿ
ದೂರಕ್ಕೊಯ್ಯುತಿದೆ ಮನವನು
ತಿರುಗಲಾರೆನು ಸರಿಯಲಾರೆನೆಂದು
ನಯವಾಗಿ ದೂರುತ್ತಿದೆ
ದೂಡುತಿದೆ ಈ ತನುವನು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ