ಜೀವದ ತಂತಿಯು ಮೀಟಿದೆ
ಹೃದಯದ ಗೆರೆಯನು ದಾಟಿದೆ
ಪಲ್ಲವಿ ಅರಿಯಲು
ಒಲವನು ಮರೆಯಲು
ಅನುಪಲ್ಲವಿ ತಾನೆ ಜಾರಿದೆ
ಭಾವನೆಗಳನು ಮಾರಿದೆ..
ಭಾವನೆಗಳನು ಮಾರಿದೆ..
ನೀರಿಗೆ ಬೀಳುವ
ಕಲ್ಲಿನ ದನಿಯು
ಶಾಂತತೆಯನ್ನೆ ಕದಡಿದೆ
ಜೀವನ ಚೈತ್ರವ
ತುಂಬಿದ ನೆನಪುಗಳ
ಸಂಬಂಧವನ್ನೇಕೋ ಕಡಿದಿದೆ
ಮತ್ತದೇ ಬಿರುಗಾಳಿ
ಸುಡು ಬಿಸಿಲಿನಲಿ
ದೂರಕ್ಕೊಯ್ಯುತಿದೆ ಮನವನು
ತಿರುಗಲಾರೆನು ಸರಿಯಲಾರೆನೆಂದು
ನಯವಾಗಿ ದೂರುತ್ತಿದೆ
ದೂಡುತಿದೆ ಈ ತನುವನು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ