ಭಾನುವಾರ, ಜನವರಿ 5, 2020

ಮತ ಹಿತಗಳೊಳಗೆ
ಅಹಿತಗಳನುಡುಕುತ
ಮಿತವಾಗಿ ತುಂಬುವ
ವಿಷ ಜಂತುಗಳಿವೆ
ನಮ್ಮೊಳಗೆ..

ದೇಶ ಸರ್ವರಿತ ಬಲ್ಲ 
ಸಂವಿಧಾನವನು 
ಒಮ್ಮೆ ತೆಗಳುತ
ಮತ್ತೊಮ್ಮೆ ಹೊಗಳುತ
ತಮ್ಮ ನೇರಕ್ಕೆ ನುಡಿವವರು..

ವೇದಿಕೆಯ ಮೇಲತ್ತಿ
ಕೈಯ ಮೇಲೆತ್ತಿ
ಬಿಗಿವರು ಭಾಷಣವನು
ಉರಿಸಿ ದ್ವೇಷವನು
ಮತ್ತೆ ಸಿಗಲಾರರು..

ಮನುಜ ಮತವನು
ಮರೆತ ತನುವಿದು
ಸುಡುವ ಅಸ್ಮಿತೆಯೊಳು
ಕರಗುತ್ತಿರುವರು
ಸಾವಿರಾರು ಜನರು...

ಪೃಥ್ವಿರಾಜ್ ಗಂಗೋತ್ರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ