ಮುನ್ನುಡಿಯನ್ನು ಬರೆಯೋಣ||೨||
ನಲಿ-ಕಲಿ ಜತೆಯಲಿ
ಮುಂದಡಿಯನ್ನು ಹಾಕೋಣ||೨||
ತನುಮನ ಶುಚಿಯಾಗಿಡಲು
ಚಿಗುರುವ ಮನಸಿಗೆ
ಬದುಕಿನ ಮೌಲ್ಯವ
ಅರಳಿಸೋ ವಿದ್ಯೆಯ ಕಲಿಸೋಣ||೧||
ಪರಿಸರ ನಂದನವನವಾಗಿಸಲು
ಸ್ವಚ್ಛತೆ ಅನುಭವ ಪಾಠವ ಮಾಡಿ
ಹೂವಿನ ಮನಸುಗಳಲ್ಲಿ
ಪರಿಸರ ಸೂಕ್ಷ್ಮತೆ ಪಸರಿಸೋಣ ||೧||
ಸಾಹಸ ಮೆರೆದಿಹ ಇತಿಹಾಸ
ಚೆಲುವಿನ ತಾಯಿ ನುಡಿ ಕನ್ನಡ
ಸಮರಸ ಬಾಳ್ವೆಯ ಬೆಳಕುಗಳು
ನಾಳೆಯ ಬದುಕಿನ ಸೋಪಾನ ||೧||
ಬಣ್ಣದ ಮಾತಿನ ಮರ್ಮಗಳು
ಮನುಕುಲ ಕಲಕುವ ದ್ವೇಷಗಳು
ದೇಶವ ಸುಡುವ ಕವಲುಗಳು
ಎನ್ನುವ ಸತ್ಯವ ಪಠಿಸೋಣ ||೧||
ಮನೆಮನ ಬೆಸೆಯುವ ಬಂಧವನು
ತುಂಬುವ ಮುದ್ದಿನ ನಗುವಾಗು
ಬೋಧನೆಗೈಯುವ ಗುರುಗಳಿಗೆ
ವಿನಯದಿ ವಂದಿಸೋ ಮಗುವಾಗು ||೧||
ನಿನ್ನೊಳು ಉದಿಸುವ ನೋವಿಗೆ
ಜ್ಞಾನದ ಜ್ಯೋತಿಯೆ ಸಾಂತ್ವನ
ಎನ್ನುತ ಮಕ್ಕಳ ಬೆಳೆಸೋಣ
ಭವಿತವ್ಯಕ್ಕೆ ಕನ್ನಡಿ ಹಿಡಿಯೋಣ ||೧||
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ