ಭಾನುವಾರ, ನವೆಂಬರ್ 13, 2022

ನೀಲ ಕೇಶವನು ಬಾಚಿ

ಮಲ್ಲಿಗೆಯ ಮುಡಿದು

ಸಿಂಗರಿಸಿ ಕುಳಿತೆ ಏಕೆ

ನೀಲಾಂಬರಿ ನೀ..

ತಿಳಿನೀರ ಕೆರೆಯಲಿ 

ನಿನ್ನ ಸೌಂದರ್ಯವನು

ನೀಲಕಾಶದೊಡೆಯ ರವಿ

ಮಾತ್ರ ಸವಿಯುವನೇನೆ..


ಚಹರೆಯೊಳು ಸಿಂಧೂರ

ಗಂಭೀರದಾಲೋಚನೆ 

ಬಿಂದಿಗೆಯೊಳು ನೀರ

ತುಂಬಿದೆಯಲ್ಲೇ

ಶೃಂಗಾರ ಭಾವದೊಳು

ಎನ್ನ ಸೂರೆಗೈವ

ನಿನ್ನ ಮುಂಗುರಳ

ಸರಿಸಿ ನೋಡಬಾರದೇಕೆ..


ನೀಲ ಕಂಗುತೆಂಗುಗಳ 

ಬಿಳಿಸೀರೆ ಸರಿದು 

ಮುಂಜಾವ ಕಿರಣದಂತೊಳೆವ 

ಕಾಂತಿಯ ಚೆಲುವೆ

ಕನಸ ಜೋಳಿಗೆಯ ತುಂಬಿ 

ಕೈ ಹಿಡಿದು ನಡೆಯೋಣ

ಬಾ ಎನ್ನ ಬಾಳಿಗೆ

ಓ ಚೆಂದ ಬಾಲಿಕೆಯೆ...



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ