ಇಲ್ಲಿ ಮಾಡಿದಾ ಕಾರ್ಯಗಳಿಗೊಂದು
ಫಲ ಅನುಭವಿಸುವುದಲ್ಲಿ
ವೇದ ವೇದಾಂತಿಗಳೆಂಬರು
ಆದರೆ ಬಸವ ನುಡಿದಂತೆ
ಇಹದ ಕರ್ಮಫಲ ಭಂಜಿಸುತಿಹುದೆನ್ನ
ಬಸವಳಿದ ಬದುಕನು ಈ ಜನ್ಮದಲಿ
ಭುವಿಯೊಡೆದು ತಿರುಳ ಬಗೆದವರ
ಆಕಾಶವನು ಕಾಯದಿಂದಲೆ ಮುಟ್ಟಿದ
ಮನ ತಟ್ಟದ ದೇಹವನ್ನೊಪ್ಪದ
ಅರ್ಥವಿಲ್ಲದ ಮನುಜ ದಾಹವನು
ಕ್ರಿಮಿಯನ್ನಿಟ್ಟು ಶಿವ ತಾನಾಡಿಸುತಿಹನು
ಸಂಗಮನೊಲಿಸುವ ಪರಿ ಮರೆತೆವಯ್ಯ
ನೆಪವಾಗುತಿಹೆ ನೀನು
ಅನುಭಾವವನು ದಿಕ್ಕರಿಸಿ ಸಮರ್ಥನೆಯನಪ್ಪಿ
ಸ್ವಾರ್ಥ ಭುಗಿಯಲಿ ಪಲ್ಲವಿಸಿ
ನಾಲಗೆಯ ಎಳೆವವರ ಬಂಧುವಂತೆ ನೀ
ರಾಜಕಾರಣಿಗಳ ಮತಗಳ ಮಮಕಾರವಂತೆ
ನೀ ತೊರೆದ ಐಶ್ವರ್ಯ ಮದದೊಳಗೆ
ನಿನ್ನ ತಮಗಾಗುವಂತೆ ಬನ್ನಿಪರಯ್ಯ
ನೆನಪಾಗುತಿಹೆ ನೀನು
ಜಾತಿ ಭಂಡರ ನೀತಿಯನುಟ್ಟ
ಧರ್ಮದಮಲಿನ ಭಯದಿ ಸುಡುವರ
ಅರಿಷಡ್ವರ್ಗದೊಳು ಹೊರಳಾಡುವ
ನರನಾಟಕವನು ಬಿಸುಟು
ಕೂಡಲ ಸಂಗದಲಿ ನಾನೂ ಇರಬೇಕಿತ್ತು
ಪೃಥ್ವಿರಾಜ್ ಜಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ