ಹರಿಯ ವರವಿರೆ
ಸಹಸ್ರ ಬಾಹುಬಲನಿವ
ಅಧಿಕಾರ ಮದವನು
ತಲೆಗೇರಿಸಿದವ
ಅಹಂಕಾರ ತುಂಬಿ
ಪರಶುವಿಗೆ ಶರಣಾದ..
ಹೆಸರಿಟ್ಟ ಕೂಡಲೇ
ಅರ್ಜುನನಾಗಲಾರ
ಭುಜಬಲ ಮಾತ್ರದಿ
ಕ್ಷತ್ರಿಯನಾಗಲಾರ
ಮದತುಂಬಿದವನು
ಪ್ರಜಾಪತಿಯಾಗಲಾರ
ಶರಣಾಗು ಆತ್ಮೀಯರೊಳು
ವರವಾಗು ದೀನದಲಿತರೊಳು
ಮಗುವಾಗು ತಾಯ ಮಡಿಲೊಳು
ರಕ್ಷಕನಾಗು ರಾಕ್ಷಸ ಪ್ರವೃತ್ತಿಯೊಳು
ಯುಗ ನೆನೆವುದು ನಿನ್ನ
ಮಣ್ಣ ಸೇರಿದ ಕೊನೆಗೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ