ತೊರೆಯದಿರೆನ್ನನು ಕೃಷ್ಣ
ರಾಧಿಕ ವಲ್ಲಭ ಶ್ರೀ ಕೃಷ್ಣ
ನಿನ್ನನೆ ನಂಬಿರುವ ಜೀವ
ನಿನ್ನೊಲು ಶರಣಾದ ಈ ಭಾವ||೨||
ನಾ ರಾಧೆಯಾಗಲಿಲ್ಲ ನಿನ್ನಯ
ಯಶೋದೆಯಂತೋ ಅಲ್ಲ ಕನಯ್ಯ
ಮರುಳಾದೆನು ನೋಡಿ ನಿನ್ನಾಟವನು
ಮರೆಯಲಾರೆನು ಬಾಲ ತುಂಟಾಟವನು..
ಸ್ವೀಕರಿಸೋ ಹೇ ಮುಕುಂದ
ನಿನ್ನ ಭಕ್ತಿಯ ಲೀಲಾನಂದ|೨|
ತಪ್ಪಿದ ಹೆಜ್ಜೆಗೆ ನಿನ್ನ ವಾಣಿಯು
ಸುಮಧುರ ಸಾನಿಕ ಧ್ವನಿಯು
ದುರುಳನ ರಕ್ಷೆಯ ಮುರಿದ ಮುರಾರಿ
ಮಗಳಿಗೆ ವರವನು ನೀಡಿದ ಶ್ರೀ ಹರಿ
ಆಸರೆ ನೀಡು ಅರ್ಜುನ ಸಖನೆ
ರುಕ್ಮಿಣಿ ಭಾಮೆಯ ಪ್ರಿಯಕರನೆ|೨|
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ