ಕೃಷ್ಣ ಕೃಷ್ಣ ಎಂದೆನುತಾ
ದಾರಿಯೊಳು ಬಿದ್ದಿಹ
ಪರಿಜಾತವು ಪರಿತಪಿಸಲು
ಇಬ್ಬರ ಸಂತೈಸಿದವ
ಸುಖದುಃಖಗಳ ಎಲ್ಲರೊಳಿಟ್ಟು
ಮರೆಯಾದೆಯಾ ಮಾಧವ..
ಪರರದು ನನ್ನದು ನಿನ್ನದು ಎನ್ನದೆ
ಎಂದೆನುತಾ ಸ್ವಾರ್ಥದೊಳು
ಎಲ್ಲರ ಮನೆಯೊಳು
ಸತ್ಯಭಾಮೆ ರುಕ್ಮಿಣಿಯಿರಲು
ಯಾವ ಬಾಣದೊಳು
ಸೆರೆಯಾದೆಯೋ ಮಧುಸೂದನ..
ಆಸೆ ತುಂಬಿದ ಬುತ್ತಿಯೊಳು
ಜೀವನ ಬತ್ತುತ್ತಿರಲು
ನಿನ್ನ ವಾಣಿ ಕೇಳಲಾಗದ ಜೀವವು
ಸಾವಿನಿಂದಲೇ ಹಾರಿತೋ
ದೇಹ ಮಣ್ಣೊಳು ಸೇರಿತೋ
ಹೇ ಆದಿ ಕೇಶವನೇ..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ