ಶುಕ್ರವಾರ, ಮೇ 18, 2012

ಭೌದ್ಧಿಕ ವೈರುಧ್ಯದೊಳಗೊಂದು ಬದುಕು ...

ವಿಚಾರಧಾರೆಯ ಸುತ್ತಲಲ್ಲಿ 
ನನ್ನ ನೆರಳೇ ಕತ್ತಲಲ್ಲಿ 
ಯಾರೋ ಕೇಳರು 
ಯಾರೋ ನೋಡರು 
ನನ್ನ ಜೀವನ ಸಂಧ್ಯವ 
ನನ್ನ ಜೀವನ ಪಂದ್ಯವ ....

ವ್ಯರ್ಥ ಮಾಡದೆ ಬದುಕ 
ಅರ್ಥವಾಗದೆ ಕಂದಕ 
ಈ ಆಚಾರದ ನಾಲಗೆಯಲ್ಲಿ 
ನೂರು ಮಾತಿನ ಹಲಗೆಯಲ್ಲಿ 
ಕಟ್ಟಿ ಬಿಡು ಬಂಧನ 
ದೂರಗೊಳಿಸು ಈ ಆಕ್ರಂದನ....

ಬಲದ ಮರದಿ ಎಡದ ಫಸಲು 
ಎರಡು ಮರದಲಿ ಒಂದೇ ಸವಾಲು 
ಸತ್ಯ ನಿತ್ಯವು  ಮಂಥನ 
ಮಿತ್ಯ ತೆಗೆಯುವ ಚಿಂತನ 
ಅಪ್ಪಿ ಬಿಡು ಕಂದನ 
ಜ್ಞಾನ ಜ್ಯೋತಿಯ ಆಲಿಂಗನ ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ