ಮಂಗಳವಾರ, ಮೇ 15, 2012

ವಸಂತ ಕಾಲ

ವಸಂತ ಕಾಲದಿ ರವಿ ಉದಯಿಸುವನು 
ಮೂಡಣ ದಿಕ್ಕಿನಲಿ 
ಮಲ್ಲಿಗೆ ಹೂಗಳು ಬಿಮ್ಮನೆ ಅರಳಿವೆ 
ನಮ್ಮಯ ತೋಟದಲಿ
ತೋರಿಹ ಮಂಜಿನ ಹನಿಗಳು 
ಮಾಡಿವೆ ಎಲೆಗಳ ಬಲು ಅಂದ 
ಬೀರಿರೆ ಪರಿಮಳ ಬಂಧವು
ದುಂಬಿಗಳಿಗೆಲ್ಲ ಆನಂದ....

ಕೋಗಿಲೆ ಸಂಕುಲ ಗಾನವ ಪಾಡುತ 
ಶುಭವನು ಕೋರಿದವು 
ಗಿಳಿಗಳು ಒಂದೆಡೆ ಸೇರುತ
ನಲ್ಮೆಯ ಮಾತುಗಳಾಡಿದವು
ಕವಿಗಳು ಕಾಣದ ಸುಂದರ ದೃಶ್ಯವು 
ಕಣ್ಣಿಗೆ ಕಾಣಿಸಲು 
ಸವಿವರದಿ ಪೇಳಿದೆ 
ನಿಮ್ಮಯ ಮನವಗೆ ತಲುಪಿಸಲು....

ಮಾವಿನ ಮರಗಳ ಹಸಿರಿನ ಚಿಗುರು 
ತಂದಿದೆ ಹೊಸ ವರುಷ  
ಕೋವಿದ ಜನಗಳ ಬದುಕಿಗೆ  
ತುಂಬಲಿ ನಿತ್ಯವೂ ನಿಜ ಹರುಷ  
ನಿತ್ಯವಸಂತವು ಆಗುತ ಮೆರೆಯಲಿ 
ನಮ್ಮಯ ಈ ಬದುಕು 
ಸತ್ಯದ ಸಮರಸ ಶಾಂತಿಯ ಪ್ರೀತಿಯ  
ಭಾವದಿ ನೀ ಬದುಕು ....

( ಇದು 9th ತರಗತಿನಲ್ಲಿ   ನಾನು  ಬರೆದ  ಕವಿತೆ. ಆಗ  ನಮ್  ಕನ್ನಡ   ಮೇಸ್ಟ್ರು  ಸೀತಾರಾಮ್  ಭಟ್  ನನ್ನ   ಈ   ಕವಿತೆಯನ್ನು ತಿದ್ದಿ  ಸರಿಮಾಡಿ  ಪ್ರೋತ್ಸಾಹ   ಕೊಟ್ಟರು....   )












ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ