ಪ್ರಾಸವಿಲ್ಲದೊಡೆ ರಸವಿರುವ
ಸರಸ್ವತಿಯು ನಾಲಗೆಯಲ್ಲಿರೆ
ಕಣ್ಣು ಮನಸುಗಳ ಸಂಗಮವದು
ನೋವು ನಲಿವುಗಳಿರಲು
ಕೊರೆವ ಮನಗಳಿಂದುದಿಸಿ
ಸಿಂಗರಿಸಿ ಬರೆವ ಪ್ರಾಸ ವಧುವದು
ನೀ ಹುದುಗಿರುವ ಸಾಲುಗಳು..
ಷಟ್ಪದಿ ಮಾತ್ರೆಗಳ ವಿಂಗಡಿಸಿ ಬರೆಯಲು
ಭಾವನೆ ಭಾವರ್ಥ ತಳತಳಿಸುತ್ತಿರೆ
ಕವಿ ಜಾಣ್ಮೆಯಿಂದಾಗುವುದು
ಏಕಾಂತ ಚಲನೆಯಲಿಂದು
ಪರಿಸರದ ಕಾಂತದಲೊಮ್ಮೆ
ಮನದ ಮಾತಾಗುವುದು
ನೀ ಹುದುಗಿರುವ ಸಾಲುಗಳು..
ಹೊಗಳು ಭಟನಿಲ್ಲದ ಭಾವದಲಿ
ಅವನಿವನ ನಿಜಕಲ್ಪನೆಗಳ ತೊಳಲಾಟ
ಜೀವ ಜೀವನದ ಸಾರವದು
ಕಬ್ಬಿಗನ ಬದುಕಿನೊಳ
ಪ್ರೀತಿ ಮಮತೆಗಳ ಜೇಂಕಾರ
ಉಬ್ಬು ತಗ್ಗುಗಳ ಅಹಕಾರವದು
ನೀ ಹುದುಗಿರುವ ಸಾಲುಗಳು ..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ