ಬದುಕಿಗಾಗಿ ನನ್ನಾಧಿಕಾರವನು
ನಿನಗೆ ಅರ್ಪಿಸುವೆನು
ರಕ್ಷಣೆ ಸಮರ್ಪಣೆ ನೀ
ಮಾಡುವೆನೆಂದು
ಹೇಳಿರುವರು ತಾತ್ವಿಕರು
ಹಕ್ಕುಗಳ ರಾಶಿಯದು
ಸೇರಿದ ಪ್ರಭುತ್ವವಿದು
ಕಾವವನು ಅಧಿಕಾರವನು
ಸಮಾಜದ ಏಳಿಗೆಗಾಗಿ
ರಾಜ್ಯದ ಕಲ್ಯಾಣಕ್ಕಾಗಿ
ಮೀಸಲಿಡುವವನಾಗಿ
ನಮಗೊಳಿತು ಸರಿ ನಡೆಗೆ
ನಮಗಳಿವು ಅರಿ ದ್ವೇಷಕ್ಕೆ
ಕಷ್ಟ ನಷ್ಟದಲಿ ಬಂದು
ಬಂಧುವಾಗು ದೊರೆಯೆ
ಸಮಾಜದ ನಲಿವಿನಲಿ
ನಮ್ಮ ಸಂಸಾರದಲ್ಲಿ
ನಮ್ಮವನಾಗಿ ಯೋಚಿಸು
ಅನಿವಾರ್ಯಕ್ಕೆ ಯೋಜಿಸು
ಕೆಡುಕಿರಲು ಜನರಲ್ಲಿ
ಮೂಢನಂಬಿಕೆ ಮರಳಿ
ಸಂಹರಿಸು ಕಾಯ್ದೆಯಲಿ
ದೇಶದೋಷವ ಕಳೆಯಲು
ಹಣ ಚೆಲ್ಲಿ ಯಾಚಿಸದಿರು
ಮತ ಬೇಟೆಯಲ್ಲವದು
ದ್ವೇಷ ಭಾವದ
ಡೊಂಬರಾಟವು ಸಲ್ಲದು
ಸಹಕಾರ ಸಂಬಂಧ
ಅಭಿವೃದ್ಧಿ ಅಭಿಪ್ರಾಯ
ಸರ್ವರ ಶಕ್ತಿಯದು
ನೀ ಪ್ರತಿನಿಧಿಯಾಗುವುದು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ