ಸೋಮವಾರ, ಮಾರ್ಚ್ 19, 2018

ಕಲ್ಯಾಣದ ಕೂಗು

ಧರ್ಮ ಕರ್ಮಗಳ
ಅಣಕಿಸಿ ಭಂಜಿಸುವ
ರಾಜಕೀಯ ಸರದಾರರ
ನೆಚ್ಚಿ ಕಚ್ಚಾಡುವ
ಕಾಯಕ ವ್ಯಾದಿಗಳೆ

ನಿಮಗೆಲ್ಲಿ ಅರ್ಥವಾಗುವುದು
ರಾಜಕೀಯ ತೊರೆದ
ಧರ್ಮ ಜೀವನದ
ಚಿಂತನಾ ಚಾವಡಿಯ
ಶಿವಶರಣರ ನಡೆ

ಜಾತಿಯಿಂದ ಜಾತನಲ್ಲ
ಚಿಂತನೆಯು ಪುಟಿದೇಳಲು
ನಿನ್ನ ಹೊಸಹುಟ್ಟು
ಶಿವ ಭಕ್ತರಿಗದು ಲೌಕಿಕ
ಸ್ವರ್ಗದಂತಿವುದು ಅರಿತರೆ
ತನ್ನರಿದವನಿಗೆ ಕೇಳಿಸದು
ಕಲ್ಯಾಣದ ಕೂಗು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ